ಬಣ್ಣಗೆಟ್ಟ ಇರುಳುಗಳ ನಡುನಡುವೆ
ಹೊರಳಿ ನರಳಿವೆ ವಿರಹದುರಿಯ
ದಳ್ಳುರಿ, ಎಲ್ಲಿ? ಎಲ್ಲಿ?
ಹೋದವೆಲ್ಲಿ ಮುಗಿಲ ಪಡೆ?
ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ
ಬಾಯಾರಿವೆ, ತೊನೆಯುವ ಬಯಕೆ
ಆಸೆಗಳ ಚೆಲ್ಲಾಟದಲಿ ಮೂಕಸಂಕಟ
ಯಾರಿಗೆ ಬೇಕಾಗಿತ್ತು ನೂರು ಹೆಣ್ಣುಗಳ
ನಡುವಿನ ರಾಣಿ ಪಟ್ಟ
ಅನುದಿನವೂ ನವತಾರುಣ್ಯವ
ಮೀಸಲು ಮುರಿವ ಮೃಷ್ಟಾನ್ನದ
ನಡುವೆ ಉಂಡೆಸೆದ ಬಾಳೆಲೆಯ
ನೆನಪೇ ಬರಿ ಕನಸು
ಅರಮನೆ ವಾಸ ಸೆರೆಯಾಳಿನಂತೆ
ಕಣ್ಕಟ್ಟು ಬಿಗಿದು ಬಯಲೊಳಗೆ
ಓಡುವಾಟ ಮುಗ್ಗರಿಕೆ
ಕಾಣದ ಹಾದಿ ಮುಳ್ಳಿನಬೇಲಿ
ಕಾಲ್ತೊಡಕು, ಬೊಗಸೆ ತುಂಬ ನೆತ್ತರು
ಸಿರ್ರನೆದ್ದು ಹಿಂಡುವ ಬಿರುಗಾಳಿ
ಸುಳಿಸುತ್ತಿ ಹಿಂಡುವ
ಕಬಂದ ಬಾಹುಗಳ ಸೆಣಸಾಟದಲಿ
ಬಳಲಿಕೆ, ಹೊರಬರಲಾರದ ಬಿಕ್ಕು
ದಿಕ್ಕು ತಪ್ಪಿದ ಮೋಡಗಳ ಹಿಂಡು
ತಂಪೆರೆಯಲಿಲ್ಲ ಕೊನೆಗೂ
ಬೇಗುದಿ ತಾಪ ನಿಟ್ಟುಸಿರು
ಲೆಕ್ಕವಿಡದ ಬಿಸಿಯುಸಿರು
ರಾಚಿದೆ ಗಪ್ಪನೆ ಕತ್ತಲೆ ಬೆಂಕಿಗೆ
ಸುಟ್ಟು ಕರಕಾದ ಭಾವಗಳ
ಬೂದಿ ಬಂಗಾರದ ಕರಂಡಿಕೆಯೊಳಗೆ
*****
Related Post
ಸಣ್ಣ ಕತೆ
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…